ಕ್ರೈಸ್ತ ಮತ್ತು ಸೂಫಿ ಪಂಥದವರೊಂದಿಗೆ ತಾರಾನಾಥರು
ಮೈಸೂರಿನಲ್ಲಿ ನಡೆದ ಮುಸ್ಲಿಂ ಕಾನ್ಫರೆನ್ಸ್ ನಲ್ಲಿ ಮಧ್ಯದಲ್ಲಿ ಕುಳಿತಿರುವವರು ಬಿಳಿ ವಸ್ತ್ರಧಾರಿ ಪಂ. ತಾರಾನಾಥರು
ತಾರಾನಾಥರ ವ್ಯಕ್ತಿತ್ವದ ಬೆಳವಣಿಗೆಯ ಪರಿಣಾಮವಾಗಿ ಬೀದರಿನ ಕ್ರೈಸ್ತರು
ತಮ್ಮ ಆಸ್ಪತ್ರೆಯಲ್ಲೂ ತಾರಾನಾಥರ ಸಹಾಯವನ್ನು ಕೋರಿದರು. ಕ್ರಿಸ್ತರ ಚರ್ಚಿನಲ್ಲಿ
ತಾರಾನಾಥರು ‘ಬೋಧನಾ ಉಪನ್ಯಾಸವನ್ನು’ ಮಾಡಬೇಕೆಂದು ಸ್ಥಳೀಯ ಪಾದ್ರಿಯು
ಆಹ್ವಾನಿಸಿದರು. ಅಲ್ಲದೆ ಸಭೆಗೆ ತಾರಾನಾಥರನ್ನು ಪರಿಚಯಿಸುತ್ತ “ಈ ಮಹಾವ್ಯಕ್ತಿಯು
ಅಧಿಕನಾದ ಕ್ರೈಸ್ತನಾಗಿದ್ದಾನೆ ” ಎಂದು ವಿವರಿಸಿದರು. ಕ್ರಿಸ್ತನ ಭೋಧನೆಗಳನ್ನು
ತಾರಾನಾಥರು ಆಳವಾಗಿ ಅರಿತಿದ್ದಿದ್ದು ಅಲ್ಲಿ ನೆರೆದವರಿಗೆ ಅಂದು ಪರಿಚಯವಾಯಿತು.